ಬರುವ ಚುನಾವಣೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಸೋಲುವ ಭೀತಿ ಇದೆ. ಚುನಾವಣೆ ಬಂದಾಗ ಕ್ಷೇತ್ರದ ಜನರಿಗೆ ಆಕಾಂಕ್ಷಿಗಳು ಆಮಿಷ ತೋರಿಸುವುದು ಸ್ವಾಭಾವಿಕ. ಇದು ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದಲ್ಲಿ ಜೋರಾಗಿದೆ. ಈ ಬೆಳವಣಿಗೆ ಸರಿಯಲ್ಲ, ಯಾವ ಪಕ್ಷದವರು ಇಂಥ ಕೆಲಸ ಮಾಡಬಾರದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ತಿಳಸಿದರು
ಅಭಿವೃದ್ಧಿ ಮಾಡಿದ್ದರೆ, ಉಡುಗೊರೆ ಕೊಡುವ ಅವಶ್ಯಕತೆ ಏನಿದೆ, ದೊಡ್ಡ ದೊಡ್ಡ ಪೆಂಡಾಲ್ ಹಾಕಿ ಜನರಿಗೆ ಉಡುಗೊರೆ ಕೊಡುವುದು ನಾಚಿಗೇಡಿತನದ ಸಂಗತಿ. ಮನೆ ಮಗಳು ಎಂದು ಅವರು ಭಾಷಣದಲ್ಲಿ ಹೇಳೋದು. ಆಣೆ ತೊಗೊಂಡು ಜನರಿಂದ ಮತ ಹಾಕಿ ಎನ್ನುವುದು ಎಷ್ಟು ಸರಿ, ಚುನಾವಣೆಯಲ್ಲಿ ಜನರು ಇದರ ಬಗ್ಗೆ ಒಳ್ಳೆಯ ತೀರ್ಮಾನ ಮಾಡುತ್ತಾರೆ. ಬಿಜೆಪಿಯಿಂದ ಗ್ರಾಮೀಣ ಮತಕ್ಷೇತ್ರದಲ್ಲಿ ಆಕಾಂಕ್ಷಿಗಳು ಹೆಚ್ಚಿದ್ದಾರೆ ಎಂದರು