ಅಂಭಿಗರ ಚೌಡಯ್ಯನವರ 903 ನೇ ಜಯಂತಿ, ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಉಸ್ಯುವಾರಿ ಸಚಿವ ಗೋವಿಂದ ಕಾರಜೋಳ ಅವರು
ನಿಜಶರಣ ಅಂಭಿಗರ ಚೌಡಯ್ಯನವರ 903 ನರೆ ಜಯಂತಿ ರಾಜ್ಯ ಸರ್ಕಾರದಿಂದ ನಾಡಿನ ಉದ್ದಗಲಕ್ಕು ಆಚರಣೆ ಮಾಡುತ್ತಿದ್ದು, ನೇರೆ ರಾಜ್ಯ ಮಹಾರಾಷ್ಟ್ರದಲ್ಲಿಯು ಆಚರಣೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
12 ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣವರ ನೇತೃತ್ವದ ಅನುಭವ ಮಂಟಪ ಪೀಠಾಧಿಪತಿಗಳಾದ ಅಲ್ಲಮ್ಮ ಪ್ರಭುಗಳ ನೇತೃತ್ವದಲ್ಲಿ 770 ಜನ ಗಣಂಗಣ್ಯರಿದ್ದರೋ, ನೊಂದವರಿಗಾಗಿ, ಕಾಯಕ ಜೀವಿಗಳಿಗಾಗಿ, ಧರ್ಮದ ಜಾತಿಯ ಹೆಸರಿನಲ್ಲಿ ನಡೆತಕ್ಕಂತ ಶೋಷಣೆಯನ್ನು ತಪ್ಪಿಸಲು ಒಂದು ಹೊಸ ವ್ಯವಸ್ಥೆ ಹುಟ್ಟು ಹಾಕಿದವರು ಬಸವಣ್ಣವರು, ಅವರ ಹೆಸರಿನಲ್ಲಿ ಅವರಿಗೆ ಹೆಗಲಿಗೆ ಹೆಗಲು ಕೊಟ್ಟು ಅತ್ಯಂತ ಮುಂಚೂನಿಯಲ್ಲಿದ್ದು, ನಿಜ ಶರಣ ಅಂಭಿಗರ ಚೌಡಯ್ಯ ನವರು ಕೂಡಾ, ಸಮಾಜದ ಸಾಮಜಿಕ ನ್ಯಾಯಕ್ಕಾಗಿ ಕಲ್ಯಾಣದ ಕ್ರಾಂತಿಯಲ್ಲಿ ಭಾಗವಹಿಸಿದ್ದಂತವರು.
ಬಸವಣ್ಣನವರ ಬಯಕೆಯಂತೆ ನಾಡಿನಲ್ಲಿ ಎರಡೇ ಜಾತಿ ಒಂದು ಗಂಡು ಒಂದು ಹೆಣ್ಣು ಎನ್ನುವ ಭಾವನೆ ಎನಿತ್ತೋ, ಅದು ಇವತ್ತಿನ ಸಮಾಜ ಅನುಸರಿಕೊಂಡು ಬದುಕಿದರೇ ಕಂಡಿತವಾಗಿ ಬಸವಣ್ಣನವರು ಬಹಸಿದ ಸುಂದರ ಸಮಾಜ ನಿರ್ಮಾಣವಾಗುತ್ತದೆ. ನಮಗಾಗಿ ಹೋರಾಟ ಮಾಡಿರುವ ಅಂಬಿಗರ ಚೌಡಯ್ಯ, ಮಾದಾರ ಚನ್ನಯ್ಯನವರು, ಶಮಗಾರ ಹರಳಯ್ಯನವರು, ಅನೇಕ ಜನ ಶರಣರು ಹೋರಾಟ ಮಾಡಿದ್ದಾರೋ ಅವರ ಹೋರಾಟಕ್ಕೆ ಇವತ್ತ ಜಯ ಸಿಕ್ಕಂತೆ ಆಗುತ್ತದೆ ಎಂಬ ಭಾವನೆ ವ್ಯಕ್ತಪಡಿಸುತ್ತೇನೆ ಎಂದರು.
ಶಾಸಕ ಅನಿಲ್ ಬೆನಕೆ, ಜಿಲ್ಲಾಧಿಕಾರಿ ಸಂಜಯ ಪಾಟೀಲ ಹಾಗೂ ಅಂಭಿಗರ ಚೌಡಯ್ಯನವರ ಸಮುದಾಯದ ನಾಯಕರು, ಜನರು ಉಪಸ್ಥಿತರಿದ್ದರು.