Kannada News

ಗ್ರಂಥಾಲಯಗಳು ಜ್ಞಾನ ಭಂಡಾರವನ್ನು ಹೆಚ್ಚಿಸುವ ಕೇಂದ್ರ ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ

ಹೌದು ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಗ್ರಂಥಾಲಯಗಳಳ್ಳಿ ಜ್ಞಾನ ಭಂಡಾರವನ್ನು ಹೆಚ್ಚಿಸುವ ಕೇಂದ್ರಗಳಾಗಿದ್ದು, ನಿತ್ಯ ಗ್ರಂಥಾಲಯಕ್ಕೆ ಭೇಟಿ ನೀಡಿ ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕೆಂದು ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ರಾಷ್ಟೀಯ ಗ್ರಂಥಾಲಯ ಸಪ್ತಾಹದ ಪ್ರಯುಕ್ತ ಇಲ್ಲಿನ ಸಾರ್ವಜನಿಕ ಗ್ರಂಥಾಲಯದಲ್ಲಿ ನಡೆದ ಸಪ್ತಾಹ ಕಾರ್ಯಕ್ರಮದ ಪೂಜೆ ನೆರವೇರಿಸಿ ಮಾತನಾಡಿದ ಅವರು, ಇಂದಿನ ಕಾಲದ ಯುವ ಜನತೆ ಕೇವಲ ಮೊಬೈಲ್‌ನ ಸಹವಾಸದಿಂದ ಲೈಬ್ರರಿಯಿಂದ ದೂರವಿದ್ದಾರೆ.

ದಿನ ನಿತ್ಯ ಗ್ರಂಥಾಲಯಕ್ಕೆ ಬರುವುದರಿಂದ ಓದುವ ಹವ್ಯಾಸವನ್ನು ತನ್ನಿಂದ ತಾನೆ ಬೆಳೆಸುತ್ತದೆ ಎಂದರು.
ಇವತ್ತು ನಾನು ಕೆಎಎಸ್ ಪಾಸಾಗಿ ಉನ್ನತ ಸ್ಥಾನ ಏರಲು ಸಾರ್ವಜನಿಕ ಗ್ರಂಥಾಲಯದಿಂದ ಮಾತ್ರ ಸಾಧ್ಯವಾಗಿದೆ ಎಂದು ಹೆಮ್ಮೆಯಿಂದ ಹೇಳುತ್ತೇನೆ.

2015-16ರ ಅವಧಿಯಲ್ಲಿ ಕೆಎಎಸ್ ಪರೀಕ್ಷೆಗಾಗಿ ತಯಾರಿ ನಡೆಸುವ ವೇಳೆ ಬೆಂಗಳೂರಿನ ವಿಷ್ಣುವರ್ಧನ ಸಾರ್ವಜನಿಕ ಗ್ರಂಥಾಲಯದಲ್ಲಿ ಬೆಳಗಿನ ಜಾವದಲ್ಲಿ ಲೈಬ್ರರಿ ಮುಂದೆ ಸಾಲುಗಟ್ಟಿ ನಿಂತು ಅಭ್ಯಾಸ ಮಾಡುತ್ತಿದ್ದೇವು ಎಂದು ಇದೇ ವೇಳೆ ನೆನಪಿಸಿಕೊಂಡರು.

ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರಂಥಾಲಯದ ಗ್ರಂಥಪಾಲಕ ಸಿದ್ದು ಮೋಟೆ ಅವರು, ನಮ್ಮ ರಾಮದುರ್ಗದ ಗ್ರಂಥಾಲಯವು ರಾಜ್ಯದ ಮೊಟ್ಟಮೊದಲ ಗ್ರಂಥಾಲಯ ಹಾಗೂ ದಕ್ಷಿಣ ಭಾರತದ 5ನೇ ಗ್ರಂಥಾಲಯವಾಗಿದೆ. ಬರುವ ನ.3೦ ರಂದು ಗ್ರಂಥಾಲಯದಲ್ಲಿ ‘ಶತಮಾನೋತ್ತರ ಬೆಳ್ಳಿ ಮಹೋತ್ಸವ’ ಕಾರ್ಯಕ್ರಮವನ್ನು ಇದೇ ಗ್ರಂಥಾಲಯದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ನಿವೃತ್ತ ಉಪನ್ಯಾಸಕ ಆರ್.ಎಂ. ಪಾಟೀಲ ಮಾತನಾಡಿದರು. ಬಿಜಗುಪ್ಪಿಯ ಶ್ರೀಸುವೃತಾನಂದ ಸರಸ್ವತಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ನಿವೃತ್ತ ಸೈನಿಕ ಪುಂಡಲೀಕ ನಡಗಡ್ಡಿ, ಗ್ರಂಥಾಲಯದ ಸಹಾಯಕ ಸುಭಾಸ ದಾಸರ, ಸಿಬ್ಬಂದಿ ಕೃಷ್ಣ ಕಂಬಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು .
ವರದಿ, ಎಮ್ ಕೆ ಯಾದವಾಡ ರಾಮದುರ್ಗ

 

Belgaum Express News Desk

Leave a Reply

error: Content is protected !!
%d bloggers like this: