ಹೌದು ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮಕ್ಕೆ ತಲುಪಿದ ಉರುಳು ಸೇವೆ ಮಾಡುತ್ತಿರುವ ವಿಠ್ಠಲನ ಭಕ್ತ
ಧಾರವಾಡ ಜಿಲ್ಲೆಯ ನರೇಂದ್ರ ಗ್ರಾಮದ ಈಶ್ವರ ಅಂಬಣ್ಣವರ ಇವರು ಕಳೆದ ಎಂಟು ವರ್ಷಗಳಿಂದ ತನ್ನೂರಿನಿಂದ ಪಂಡರಪೂರಕ್ಕೆ ಉರುಳು ಸೇವೆ ಮಾಡುತ್ತಿದ್ದಾರೆ ಈ ಬಾರಿಯೂ ಉರುಳು ಸೇವೆ ಮಾಡುತ್ತಾ ಇಂದು ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮಕ್ಕೆ ಬಂದು ತಲುಪಿದ್ದಾರೆ. ಕಟಕೋಳ ಗ್ರಾಮದ ಪ್ರಮುಖ ರಸ್ತೆಯ ಮೇಲೆ ಉರುಳುಸೇವೆ ಮಾಡುತ್ತಿರುವ ದೃಶ್ಯ ಕಂಡು ಬಂದಿತು ಜನವರಿ 4 ರಂದು ಈ ಉರುಳು ಸೇವೆ ಪ್ರಾರಂಭಿಸಿದ ಇವರು ಪಂಡರಾಪುರದ ವರೆಗೆ ಇವರ ಸೇವೆ ನಡೆಯಲಿದೆ. ಪ್ರತಿ ದಿನ ಹತ್ತು ಕಿಲೋಮೀಟರ್ ನಷ್ಷು ಇವರು ಉರುಳು ಸೇವೆ ಮಾಡುತ್ತಾರೆ ನರೇಂದ್ರ ಗ್ರಾಮದಿಂದ ಒಟ್ಟು ನಾಲ್ಕುನೂರು ಕಿಲೋಮೀಟರ್ ದೂರದಲ್ಲಿರುವ ಪಂಡರಪೂರದ ವಿಠ್ಠಲನ ದರ್ಶನಕ್ಕೆ ಉರುಳು ಸೇವೆ ಮೂಲಕ ಹೋಗಲು ಅಂದಾಜು ನಲವತ್ತು ದಿನಗಳಾಬಹುದು ಎಂದು ಹೇಳಲಾಗಿದೆ
BELGAUM EXPRESS > Blog > Kannada News > ನಾಲ್ಕುನೂರು ಕಿಲೋಮೀಟರ್ ದೂರದಲ್ಲಿರುವ ಪಂಡರಪೂರದ ವಿಠ್ಠಲನ ದರ್ಶನಕ್ಕೆ ಉರುಳು ಸೇವೆ
the authorBelgaum Express News Desk
All posts byBelgaum Express News Desk
Leave a reply