Kannada News

ಸಿದ್ದರಾಮಯ್ಯನವರು ಬ್ಯಾಲೆನ್ಸ್ ಕಳೆದುಕೊಳ್ತಿದ್ದಾರೆ : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಬೆಳಗಾವಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ ಸಿದ್ದರಾಮಯ್ಯನವರು ಬ್ಯಾಲೆನ್ಸ್ ಕಳೆದುಕೊಳ್ತಿದ್ದಾರೆ. ಅವರಿಗೆ ಸ್ಪರ್ಧೆ ಮಾಡಲು ಒಂದು ಕ್ಷೇತ್ರ ಇಲ್ಲಾ. ಹೀಗಾಗಿ ದಿನದಿಂದ ದಿನಕ್ಕೆ ಹತಾಶರಾಗ್ತಿದ್ದಾರೆ. ಅರ್ಜಿ ಕೊಡಬೇಕು ಅಂತಾ ಹೇಳಿದ್ದಾರೆ. ಯಾವ ಕ್ಷೇತ್ರಕ್ಕೆ ಅರ್ಜಿ ಕೊಡಬೇಕು ಅನ್ನೋ ಗೊಂದಲದಲ್ಲಿದ್ದಾರೆ ಎಂದರು.

ಮುಖ್ಯಮಂತ್ರಿಯಾಗಿ ಅವರು ಚಾಮುಂಡಿಯಲ್ಲಿ ಸೋತ್ರು. ಬಾದಾಮಿಯಲ್ಲಿ ಒಂದೂವರೆ ಸಾವಿರ ಮತದಿಂದ ಗೆದ್ರೂ. ಇದರ ಅರ್ಥ ಅವರು ಎಲ್ಲಿ ಹೋಗ್ತಾರೆ ಅಲ್ಲಿ ಸೋಲ್ತಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರಿಗೆ ಭಯ ಕಾಡ್ತಿದೆ. ಇಗ್ಲೆ ತೀರ್ಮಾನ ಮಾಡಬೇಕು ಅಂತಾ ಶಿವಕುಮಾರ್ ಅವರ ಮೇಲೆ ಒತ್ತಡ ಹಾಕ್ತಿದ್ದಾರೆ. ಶಿವಕುಮಾರ್ ಅವರಿಗೂ ಇದೇ ಬೇಕಾಗಿದ್ದು ಎಲ್ಲೂ ಗೆಲ್ಲಲ್ಲ ಯಾವುದನ್ನ ಹೇಳ್ತಾರೆ ಹೇಳಲಿ ಬಿಡ್ಲಿ ಅಂತಾ‌ ಕಾಯ್ತಿದಾರೆ. ಇವರನ್ನ ಮೂಲೆ ಗುಂಪು ಮಾಡಬೇಕು ಅಂತಾ ಶಿವಕುಮಾರ್ ತೀರ್ಮಾನ ಮಾಡಿದ್ದಾರೆ ಎಂದರು

Belgaum Express News Desk

Leave a Reply

error: Content is protected !!
%d bloggers like this: