Kannada News

ರಾಮದುರ್ಗ ಹತ್ತಿರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲಿ ಆರು ಮಂದಿ ಸಾವು 16ಜನ ಗಾಯಾಳುಗಳನ್ನು ಗೋಕಾಕ ಉಮರಾಣಿ ಆಸ್ಪತ್ರೆಗೆ ಕೆಪಿಸಿಸಿ ಉಪಾಧ್ಯಕ್ಷ, ಅಶೋಕ ಪಟ್ಟಣ ಭೇಟಿ

ಗುರುವಾರ ನಸುಕಿನ ಜಾವ ಗೂಡ್ಸ್‌ ವಾಹನದಲ್ಲಿ ಸವದತ್ತಿ ಯಲ್ಲಮ್ಮ ದೇವಸ್ಥಾನದ ಜಾತ್ರೆಗೆ ತೆರಳುತ್ತಿದ್ದರು.

ವಾಹನ ಸವರಾನ ನಿಯಂತ್ರಣ ತಪ್ಪಿ ವೇಗವಾಗಿ ಚಲಿಸುತ್ತಿದ್ದ ಚುಂಚನೂರು ಸಮೀಪ ಆಲದ ಮರಕ್ಕೆ ಢಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ವಾಹನ ಸಂಪೂರ್ಣ ನಜ್ಜುಗುಜ್ಜಾಗಿತ್ತು.

ಐವರು ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವ ಗೋಕಾಕ ತಾಲೂಕು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಗಾಯಾಳುಗಳನ್ನು ಗೋಕಾಕ ಖಾಸಗಿ ಆಸ್ಪತ್ರೆಗೆ ದಾಖಲಿಸಿಲಾಗಿದೆ ದಾಖಲಾದ 16ಜನರಿಗೆ ಇಂದು ಕೆಪಿಸಿಸಿ ಉಪಾಧ್ಯಕ್ಷ, ಅಶೋಕ ಪಟ್ಟಣ ಉಮರಾಣಿ ಆಸ್ಪತ್ರೆಗೆ ಭೇಟಿ ನೀಡಿ ಅರೋಗ್ಯ ವಿಚಾರಣೆ ಮಾಡಿ ಹಣ್ಣು ಹಂಪಲ ವಿತರಣೆ ಮಾಡಿದರು.

ಡಾ. ಚೇತನ ಉಮರಾಣಿ ಎಲ್ಲ ಗಾಯಳುಗಳ ಅರೋಗ್ಯ ಪರಿಸ್ಥಿತಿ ಕುರಿತು ಮಾಹಿತಿ ನೀಡಿದರು.

ಗಾಯಾಳುಗಳಿಗೆ ಸೂಕ್ತವಾದ ಚಿಕೆತ್ಸೆ ನೀಡಬೇಕು ಎಂದು ವೈದ್ಯರಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರಾದ ಜಿ.ಬಿ.ರಂಗನಗೌಡ್ರ, ಸೋಮಶೇಖರ ಸಿದ್ದಲಿಂಗಪ್ಪನವರ ರಮೇಶ‌ ಮೂಶೆನ್ನವರ,ಕುಮಾರ ಪಾಟೀಲ, ಶಾನೂರ ಅತ್ತಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು

Belgaum Express News Desk

Leave a Reply

error: Content is protected !!
%d bloggers like this: