ಹೌದು ವೀಕ್ಷಕರೇ ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ಪುರಸಭೆ ಸಾಂಸ್ಕೃತಿಕ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ ನಿಯಮಿತ ಬೆಂಗಳೂರು ಧಾರವಾಡ ವಲಯ ವತಿಯಿಂದ ಜಿಲ್ಲಾಮಟ್ಟದ ಬಂಜಾರ ಬಹುಮುಖಿ ಕಲಾ ಪ್ರತಿಭಾನ್ವೇಷಣೆ ಕಾರ್ಯಕ್ರಮ ರಾಮದುರ್ಗ
ಜರುಗಿತು.
ವಾಜಾವಾದ್ಯ ಸಮೋ ಗೀತೆ, ಬಂಜಾರ ಮಹಿಳಾ ಸಂಪ್ರದಾಯಿಕ ಗಾನ ನೃತ್ಯ, ಬಂಜಾರ ಜಾನಪದ ನೃತ್ಯ, ಯುವತಿಯರ ಗೋಮರ್ ನೃತ್ಯ, ಪುರುಷರ ಲೆಂಗಿ ನೃತ್ಯ ಸಮೂಹ ಪ್ರದರ್ಶನ, ನಂಗಾರಾ ಟೋಳ್ಳಿ
ಬಿಡಿಸುವ ನೃತ್ಯ, ಬಂಜಾರ ಕಥಾನ ಗಾಯನ, ಮಹಿಳಾ ಬಂಜಾರ ಸಾಂಪ್ರದಾಯಿಕ ಗಾಯನ, ಬಾಲಕರ ಬಂಜಾರ ಕಲಾ ಪ್ರದರ್ಶನ.
10 ರಿಂದ 12 ಜನ ಸಮವಸ್ತ್ರ ಧರಿಸಿ ಕಲಾವಿದರು ವಾದ್ಯದೊಂದಿಗೆ ಸಮೂಹ ಗಾಯನ ನಗಾರಿ ಕಾಸೇರಿಥಾಳಿ, ಜಾOಜ ತಾಳಗಳ ವಾದ್ಯ ಸಂಗೀತದ ಜೊತೆಗೆ ಸಮೋಹ ಗೀತೆಗಳನ್ನು ಹವ-ಭಾವದೊಂದಿಗೆ ಆಕರ್ಷಿಕವಾಗಿ ವೀಕ್ಷಕರ ಮೇಲೆ ಪರಿಣಾಮ ಬೀರುವಂತೆ ಸಂತ ಸೇವಾಲಾಲ್ ಅವರ ಭಕ್ತಿಯನ್ನು ನೃತ್ಯ ಹಾಗೂ ಗಾನ ಮೂಲಕ ಪ್ರದರ್ಶಿಸಿದರು. ಪ್ರದರ್ಶಿಸಿದರು.
ಈ ಸಂಧರ್ಭದಲ್ಲಿ
ಶಂಕರ್ ಲಮಾಣಿ, ಪರುಶುರಾಮ್ ಪಮ್ಮಮಾರ್,
ವಿಜಯಕುಮಾರ ರಾಠೋಡ್,
ದಾನಪ್ಪ ಲಮಾಣಿ,ಉಪಸ್ಥಿತರಿದ್ದರು.