Kannada NewsPolitics

ಸುದ್ದಿಗೋಷ್ಠಿ ವೇಳೆ ಸಹನೆ ಕಳೆದುಕೊಂಡು ಮಾಧ್ಯಮಗಳ ಮೇಲೆ ಮುಗಿಬಿದ್ದ ಸಂಜಯ್ ಪಾಟೀಲ್

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಗಿಫ್ಟ್ ಪಾಲಿಟಿಕ್ಸ್ ವಿಚಾರ, ಎಲ್ಲೆಡೆ ಕ್ಯಾಂಟರ್‌ನಲ್ಲಿ ಗಿಫ್ಟ್ ಹಂಚುತ್ತಿದ್ದರೂ ಒಬ್ಬರೂ ಸುದ್ದಿ ಮಾಡ್ತಿಲ್ಲ ಎಂದ ಸಂಜಯ್ ಪಾಟೀಲ್

ಈ ವೇಳೆ ಸುದ್ದಿ ಪ್ರಸಾರ ಮಾಡಿದ್ದೇವೆ ಸುಳ್ಳು ಆರೋಪ ಮಾಡಬೇಡಿ ಎಂದ ಮಾಧ್ಯಮ ಪ್ರತಿನಿಧಿಗಳು

ಇದು ಪ್ರೆಸ್ ಕಾನ್ಫರೆನ್ಸ್‌ನೋ ಅಥವಾ ದಾದಾಗಿರಿನೋ

ನನಗೆ ಮಾತನಾಡಲು ಕೊಡಿ ಎಂದ ಸಂಜಯ್ ಪಾಟೀಲ್

ಆಗ ಅವರೇನೋ ಕೊಡ್ತಾರೋ ಅದರ ಡಬಲ್ ಕೊಡ್ತೀನಿ ಎಂದು ಹೇಳಿದ ನಿಮಗೆ ಏನು ನೈತಿಕತೆ ಇದೆ ಎಂದು ಪ್ರಶ್ನೆ

ನೈತಿಕತೆ ಬಗ್ಗೆ ಪ್ರಶ್ನಿಸುತ್ತಿದ್ದಂತೆ ಮಾಧ್ಯಮ ಪ್ರತಿನಿಧಿಗಳ ವಿರುದ್ಧ ಗರಂ ಆದ ಸಂಜಯ್ ಪಾಟೀಲ್

ನೀವು ಮಾತನಾಡಲು ಬಿಡ್ತಿಲ್ಲ, ಈ ರೀತಿ ಸುದ್ದಿಗೋಷ್ಠಿ‌ ಬೆಳಗಾವಿಯಲ್ಲಿ ಮಾತ್ರ ನೋಡ್ತೀನಿ

ನೀವು ದಾದಾಗಿರಿ ಮಾಡಿದ್ರೆ ನಾನು ಸುದ್ದಿಗೋಷ್ಠಿ ನಡೆಸಲ್ಲ ಹೋಗ್ತೀನಿ

‘ನೀವು ಮೀಡಿಯಾದವರೋ ದಾದಾಗಿರಿ ಮಾಡುವ ಗೂಂಡರೋ?’

ಆಗ ಈ ಸಿಟ್ಟು ಒಳ್ಳೆಯದಲ್ಲ ಎಂದು ಸಂಜಯ್ ಪಾಟೀಲ್‌ಗೆ ತಿಳಿಸಿದ ಮಾಧ್ಯಮ ಪ್ರತಿನಿಧಿಗಳು

ಈ ವೇಳೆ ಮಾಧ್ಯಮ ಪ್ರತಿನಿಧಿಗಳು ಹಾಗೂ ಸಂಜಯ್ ಪಾಟೀಲ್ ಮಧ್ಯೆ ತೀವ್ರ ವಾಗ್ವಾದ

ಸುದ್ದಿಗೋಷ್ಠಿ‌ ವೇಳೆ ಸಹನೆ ಕಳೆದುಕೊಂಡು ಮಾಧ್ಯಮ ಪ್ರತಿನಿಧಿಗಳ ವಿರುದ್ಧ ಕಿರುಚಾಡಿದ ಸಂಜಯ್ ಪಾಟೀಲ್

ಕೊನೆಗೆ ತಮ್ಮ ಮನಸಿಗೆ ನೋವಾಗಿದ್ರೆ ಕ್ಷಮಿಸಿ ಎಂದ ಸಂಜಯ್ ಪಾಟೀಲ್

Belgaum Express News Desk

Leave a Reply

error: Content is protected !!
%d bloggers like this: